ದಶಮಃ ದೀಕ್ಷಾಂತ ಸಮಾರಂಭ.

ಮೈತ್ರೇಯೀಗುರುಕುಲದಲ್ಲಿ ದಿನಾಂಕ 14.4.2025 ರಂದು ದೀಕ್ಷಾಂತ ಕಾರ್ಯಕ್ರಮವು ಸುಸಂಪನ್ನವಾಯಿತು. ದಶಮ ದೀಕ್ಷಾಂತ ಸಮಾರೋಹದ ಈ ಸಂದರ್ಭದಲ್ಲಿ 10 ಜನ ವಿದ್ಯಾರ್ಥಿನಿಯರು ಗುರುಕುಲ ಶಿಕ್ಷಣದ ಆಶಂಸನಪತ್ರವನ್ನು ಪಡೆದುಕೊಂಡರು. ಬೆಳಗ್ಗೆ 8.30 ಕ್ಕೆ ಸರಸ್ವತೀಹವನದ ಮೂಲಕ ದೀಕ್ಷಾಂತವಿಧಿಯು ಆರಂಭವಾಯಿತು. ವಿದ್ಯಾಧಿದೇವತೆಯಾದ ಸರಸ್ವತಿಯ ಅನುಗ್ರಹ ಪಡೆದ ನಂತರ 10.30ಕ್ಕೆ ದೀಕ್ಷಾಂತ ಕಾರ್ಯಕ್ರಮದ ಸಭಾಕಾರ್ಯಕ್ರಮವು ಆರಂಭವಾಯಿತು. ದೀಕ್ಷಾಂತಪ್ರಬೋಧಕರಾಗಿ ಕರ್ನಾಟಕ ಗುರುಕುಲ ಪ್ರಕಲ್ಪದ ಸಂಯೋಜಕರಾದ ಡಾ. ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದರು. ದೀಕ್ಷಾಂತ ಎಂದರೆ ದೀಕ್ಷೆಯ ನಿರ್ಣಯಘಟ್ಟ. ಸಮಾವರ್ತನವನ್ನು ಮುಗಿಸಿದ ಮಕ್ಕಳು ಸಮಾಜದ ಎಲ್ಲರಂತೆ ಪ್ರವಾಹದ […]

Read More… from ದಶಮಃ ದೀಕ್ಷಾಂತ ಸಮಾರಂಭ.

ಆಚಾರ್ಯ-ಮಾತೃಶ್ರೀ ಪ್ರಶಿಕ್ಷಣವರ್ಗ

ಕರ್ನಾಟಕ ಗುರುಕುಲ ಪ್ರಕಲ್ಪ ದಿನಾಂಕ 15-05-2024 ರಿಂದ 19-05-2024 ರವರೆಗೆಗುರುಕುಲಗಳ ಕಾರ್ಯಕಲಾಪಗಳಲ್ಲಿ ಆಚಾರ್ಯ-ಮಾತೃಶ್ರೀ ಪ್ರಶಿಕ್ಷಣವರ್ಗಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಆಯಾಯ ಗುರುಕುಲಗಳಲ್ಲಿ ಪ್ರತ್ಯೇಕವಾಗಿ ಮಾಸಿಕ ಪ್ರಶಿಕ್ಷಣದ ಸಂಯೋಜನೆಯಾಗುತ್ತಿದ್ದು, ವರ್ಷದಲ್ಲಿ ಒಂದುಬಾರಿ ಎಲ್ಲಾ ಗುರುಕುಲಗಳ ಆಚಾರ್ಯ-ಮಾತೃಶ್ರೀಯವರು ಸೇರಿ ಐದುದಿನಗಳ ವಾರ್ಷಿಕ ಪ್ರಶಿಕ್ಷಣ ನಡೆಸುವ ಪರಿಪಾಠವಿದೆ. ಈ ವರ್ಷ ಮೈತ್ರೇಯೀ ಗುರುಕುಲ, ಪ್ರಬೋಧಿನೀ ಗುರುಕುಲ, ವೆದವಿಜ್ಞಾನ ಗುರುಕುಲ, ಆಂಧ್ರಪ್ರದೇಶದ ಋಷಿವಾಟಿಕಾ ಗುರುಕುಲ ಮತ್ತು ಬೆಳಗಾವಿಯ ವೃಂದಾರಣ್ಯ ಗುರುಕುಲ ಹೀಗೆ ಒಟ್ಟು ಐದು ಗುರುಕುಲಗಳ 39 ಮಂದಿ ಆಚಾರ್ಯ-ಮಾತೃಶ್ರೀಯರ ಉಪಸ್ಥಿತಿ ಇತ್ತು. […]

Read More… from ಆಚಾರ್ಯ-ಮಾತೃಶ್ರೀ ಪ್ರಶಿಕ್ಷಣವರ್ಗ

ನೂತನ ಭವನ ‘ಪರಮೇಶ್ವರೀ ‘ಅಮ್ಮಾ’ ಕುಟೀ ಯ ಪ್ರವೇಶೋತ್ಸವ

15-2-2024 ಗುರುಕುಲದ ನೂತನ ಛಾತ್ರಾವಾಸ ಪರಮೇಶ್ವರೀ ‘ಅಮ್ಮಾ’ ಕುಟೀ ಯ ಪ್ರವೇಶೋತ್ಸವವು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಇದೇ ಸಂದರ್ಭದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿಯವರು ಆಗಮಿಸಿ ಪ್ರವೇಶೋತ್ಸವದ ಮೆರುಗನ್ನು ಹೆಚ್ಚಿಸಿದರು. ಸಭಾಕಾರ್ಯಕ್ರಮದಲ್ಲಿ ಸದ್ಗುರುಗಳು ಮಾತನಾಡುತ್ತಾ “ಮೈತ್ರೇಯೀ ಗುರುಕುಲವು ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ವೇದ ಶಿಕ್ಷಣವನ್ನು ದೇಶದ ರೂವಾರಿಗಳಾದಂತಹ ಸ್ತ್ರೀಯರಿಗೆ ನೀಡುತ್ತಿರುವುದು ಶ್ಲಾಘನೀಯ ಸಂಗತಿ, ಇಲ್ಲಿನ ಮಕ್ಕಳಲ್ಲಿ ಇರುವಂತಹ ಶಿಸ್ತು ಹಾಗೂ ಆತ್ಮ ಸಂಯಮ ಇತರರಿಗೆ ಮಾದರಿಯಾಗಿದೆ” ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. “ಉಪನಿಷತ್ತುಗಳಲ್ಲಿ ಉಲ್ಲೇಖವಾಗಿರುವಂತಹ ಪರಾ ಹಾಗು ಅಪರಾ […]

Read More… from ನೂತನ ಭವನ ‘ಪರಮೇಶ್ವರೀ ‘ಅಮ್ಮಾ’ ಕುಟೀ ಯ ಪ್ರವೇಶೋತ್ಸವ

ಕೃಷ್ಣಾಷ್ಟಮೀ

6 – 9 – 2023 ರಂದು ರಾತ್ರಿ 9 ರಿಂದ ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಕೃಷ್ಣನ ಕುರಿತು ವಿಷಯಕಥನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಪಟ್ಟಿತು. ರಾತ್ರಿ 11 ಗಂಟೆಗೆ ಧಾರ್ಮಿಕ ಪೂಜೆಯು ನೆರವೇರಿತು.

[…]

Read More… from ಕೃಷ್ಣಾಷ್ಟಮೀ